ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, March 5, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೬)

ಮೂರನೇ ಮಂತ್ರ:
ಕ ಉ ನು ತೇ ಮಹಿಮನಃ ಸಮಸ್ಯಾಸ್ಮಾತ್ ಪೂರ್ವ ಋಷಯೋsನ್ತಮಾಪುಃ
ಯನ್ಮಾತರಂ ಚ ಪಿತರಂ ಚ ಸಾಕಮಜನಯಥಾಸ್ತನ್ವ: ಸ್ವಾಯಾ:

ನಿನ್ನ ಮಹಿಮೆಯನ್ನು (ಮಹಿಮನಃ) ಸಮಗ್ರವಾಗಿ (ಸಮಸ್ಯ) ನಮ್ಮ ಪೂರ್ವದ ಋಷಿಗಳಾದರೋ (ಅಸ್ಮಾತ್ ಋಷಯಃ) ಯಾರು ತಾನೇ ಬಲ್ಲರು! ಯಾರು ಸಂಪೂರ್ಣವಾಗಿ ಉಪಾಸಿಸಿರುವರು!?(ಕ ಉ)
ಯಾರೂ ಇಲ್ಲ ತಾನೇ! (ನು)
ನೀನು ನಮಗಾಗಿಯೇ, ಉಪಾಸನೆಯನ್ನು ಬಲಪಡಿಸಲೋಸುಗವೇ, ನಿನ್ನ ತಾಯಿಯಾದ ಶ್ರೀ (ಮಾತರಂ), ತಂದೆಯಾದ ಶ್ರೀರಮಣನ (ಪಿತರಮ್) ಜೊತೆಗೂಡಿ (ಸಾಕಂ), ಭುವಿಯಲ್ಲಿ ನಿನ್ನವತಾರರೂಪಗಳಿಂದ (ಸ್ವಾಯಾಸ್ತನ್ವಃ) ಪ್ರಾದುರ್ಭವಿಸುವೆ! (ಅಜನಯಥಾಃ) ನಿನ್ನ ಮಹಿಮೆಯನ್ನು ಪ್ರಕಟಿಸುವೆ!

ನಾಲ್ಕನೇ ಮಂತ್ರ:
ಚತ್ವಾರಿ ತೇ ಅಸುರ್ಯಾಣಿ ನಾಮಾದಾಭ್ಯಾನಿ ಮಹಿಷಸ್ಯ ಸಂತಿ
ತ್ವಮಂಗ ತಾನಿ ವಿಶ್ವಾನಿ ವಿತ್ಸೇ ಯೇಭಿಃ ಕರ್ಮಾಣಿ ಮಘವನ್ ಚಕರ್ಥ

ನಿನ್ನ ಬಿಂಬನಾಗಿ, ನಿನ್ನನ್ನು ಪ್ರೇರಿಸುವ, ನಿನ್ನ ನಿಯಾಮಕನಾದ (ಅಸುರ್ಯಾಣಿ)
((ಅಸುಂ ಪ್ರಾಣಂ ಯಾತಿ ನಿಯಮಯತಿ ಚ)) ಷಡ್ಗುಣಗಳಿಂದ ಮಹಿತನಾದ (ಮಹಿಷಸ್ಯ) ದೇಹನಾಶಾದಿ ದೋಷಗಳ ಸುಳಿವಿಲ್ಲದ (ಅದಾಭ್ಯಾನಿ) ನಾರಾಯಣನ ನಾಲ್ಕು ರೂಪಗಳಾದ (ಚತ್ವಾರಿ) ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣ-ವಾಸುದೇವವು ನಿನ್ನಲ್ಲಿ ಹಿರಿಸಂತಸದಿಂದ ತುಂಬಿಬಿಟ್ಟಿವೆ.
ನನ್ನ ಪ್ರೀತಿಯ ಓಡೆಯನೇ (ಅಂಗ, ಮಘವನ್), ಆ ನಿನ್ನ ಅಂತರ್ಯಾಮಿಯನ್ನು ನೀನೇ ಬಲ್ಲೆ (ತಾನಿ ವಿಶ್ವಾನಿ ವಿತ್ಸೇ) ಆ ಚತುರ್ವ್ಯೂಹನ ಪ್ರೇರಣೆಯಿಂದಲೇ ತಾನೇ ನೀನು ಸರ್ವವನ್ನೂ ಮಾಡುವಿ (ಯೇಭಿಃ ಕರ್ಮಾಣಿ ಚಕರ್ಥ)
ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣ-ವಾಸುದೇವನಿಗೆ ಅಧಿಷ್ಠಾನವಾದ ನಿನ್ನದೂ ನಾಲ್ಕು, ವಾಯು-ಪ್ರಾಣ-ಧಾರಣ-ಭಕ್ತಿ ಎಂಬ ರೂಪಗಳು ಸಾತ್ವಿಕರ ಹೃದಯದಲ್ಲಿ ತುಂಬಿವೆ.

No comments:

Post a Comment