ಯುದ್ಧದ ಮಧ್ಯೇ ಲಕ್ಷ್ಮಣನೇ ಮೊದಲಾದ
ರಾಮನ ಪಡೆಯವರು ಉರಗಬಂಧನಕ್ಕೆ ಸಿಕ್ಕು ಮೂರ್ಛಿತರಾಗುತ್ತರೆ. ಅವರಿಗೆ ಮತ್ತೆ ಜೀವನವಿತ್ತ ಪ್ರಾಣನ
ಇನ್ನೊಂದು ಲೀಲಾಕಥನ-
ರಾಮಾರ್ಚನೇ ಯೋ ನಯತಃ ಪ್ರಸೂನಂ ದ್ವಾಭ್ಯಾಂ ಕರಾಭ್ಯಾಮಭವತ್ ಪ್ರಯತ್ನಃ
।
ಏಕೇನ ದೋಷ್ಣಾ ನಯತೋ ಗಿರೀನ್ದ್ರಂ ಸಞ್ಜೀವನಾದ್ಯಾಶ್ರಯಮಸ್ಯ ನಾಭೂತ್ ॥೦೧.೧೯॥
ರಾಮನ ಪಾದಾರ್ಚನೆಗೆ ಹೂಗಳನ್ನು
ಬೊಗಸೆ ತುಂಬ ಹೊತ್ತು ತರುವಾಗ ಪಟ್ಟಷ್ಟು ಪ್ರಯತ್ನವನ್ನೂ ಇವನು ಮಾಡಲಿಲ್ಲ ಒಂದೇ ಕೈಯಲ್ಲಿ
ಸಞ್ಜೀವನಾದಿ ಔಷಧಿಗಳ ಖನಿಯಾದ ಗಂಧಮಾದನಪರ್ವತವನ್ನು ಹೊತ್ತು ಬರುವಾಗ ಕೂಡ.
ಅದು ಸಾಮಾನ್ಯವಾದ ಬೆಟ್ಟವಲ್ಲ.
"ಯೋಜನಾನಾಂ ಶತಮ್ ಉಚ್ಛಃ ತಾವದ್ ವಿಸ್ತಾರವಾನ್", ನೂರು ಯೋಜನಗಳಷ್ಟು ಎತ್ತರದ್ದು
ಅಷ್ಟೇ ಬಿತ್ತರದ್ದು. ಅದನ್ನು ಒಂದೇ ಕೈಯಿಂದ ಕಲ್ಲುಚೂರಿನಂತೆ ಒಂದೇ ಕ್ಷಣದಲ್ಲಿ ತಂದ ಇವನು.
ಆದರೇ ರಾಮನ ಪಾದಸೇವೆಗೆ ಹೊತ್ತು
ತರುವ ಹೊಗಳನ್ನು ಎರಡೂ ಕೈಯಿಂದ ಭಾರವೇನೋ ಎಂಬಂತೆ ನಿಧಾನವಾಗಿ ಸಾಗಿ ಬರುತ್ತಾನೆ.
"ಸಞ್ಜೀವನಾದ್ಯಾಶ್ರಯಮ್", ಎಂದು ಹೇಳಿದ್ದಾರೆ. ಸಞ್ಜೀವನವೇ
ಮುಂತಾದವುಗಳಿಗೆ ಆಶ್ರಯವಾದ ಪರ್ವತ ಎಂದು. ಯಾವುವು ಅವು?
ಮೃತಸಞ್ಜೀವನೀ, ಸಂಧಾನಕರಣೀ, ಸವರ್ಣಕರಣೀ ಹಾಗೂ ವಿಶಲ್ಯಕರಣೀ ಎಂದು
ನಾಲ್ಕು ಬಗೆಯ ಔಷಧಿಗಳ ತಾಣ ಆ ಪರ್ವತ.
ಛಂದಸ್ಸು ಇಂದ್ರವಜ್ರಾ.