ಎಡರನೇ ಮಂತ್ರ -
ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ ದ್ವಿತೀಯಮಾ ಸಪ್ತಶಿವಾಸು ಮಾತೃಷು ।
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ ॥
(ಪೃಕ್ಷೋ) ಸೈನ್ಯಸೈನ್ಯಯಗಳನ್ನೇ
ತಲೆಕೆಳಗೆ ಮಾಡುವವ, (ಪಿತುಮಾನ್) ಬಕಾಸುರನ ವಧೆಯ ಕಾಲದಲ್ಲಿ ಬಂಡಿ ಅನ್ನವನ್ನು ಉಂಡವ, (ದ್ವಿತೀಯಂ ವಪುಃ)ಎರಡನೇ ಅವತಾರ, ಭೀಮಸೇನ!!
ಅವನು, ಭಗವಂತನಿಂದ ಪ್ರೇರಿತನಾಗಿ (ನಿತ್ಯ)
ಏಳು ಪಾವನವಾದ ವಿದ್ಯೆಗಳಲ್ಲಿ (ಸಪ್ತ ಶಿವಾಸು ಮಾತೃಷು) ಆರಾಮವಾಗಿ ವಿಹರಿಸುವವ (ಆ ಶಯೇ).
ಯಾವುವು ಆ ಏಳು ವಿದ್ಯೆಗಳು?
ನಾಲ್ಕು ವೇದಗಳು, ಮಹಾಭಾರತ -ರಾಮಾಯಣಗಳೆಂಬ ಇತಿಹಾಸಗಳು, ಪಂಚರಾತ್ರ ಹಾಗೂ ಪುರಾಣಗಳು.
ಅಥವಾ ನಿತ್ಯವೂ, ರಣರಂಗದಲ್ಲಿ ಆರಾಮವಾಗಿ
ಶತ್ರುಗಳನ್ನು ಸದೆದು ವಿಹರಿಸುವವ. “ಪಾಂಡಿತ್ಯೇ ಚ ಪಟುತ್ವೇ ಚ ಶೂರತ್ವೇ ಅಪಿ ಬಲೇ ಅಪಿಚ
ಭೀಮಸೇನಸಮೋ ನಾಸ್ತಿ", ಎಂಬ ಮಾತು ಲೋಕಜನೀನವೆ ಆಗಿದೆ.
ಇನ್ನು, ಅದೇ ಏಳು ವಿದ್ಯೆಗಳಲ್ಲಿ ನುರಿತ, ದೇವತೆಗಳ ಒಡೆಯನಾದ (ವೃಷಭಸ್ಯ) ಇವನ
ಮೂರನೇ ಅವತಾರವನ್ನು (ತೃತೀಯಮ್) ದಶಪ್ರಮತಿ ಎಂದು ಕರೆಯುತ್ತಾರೆ. ಇವನನ್ನೇ ಜ್ಞಾನದ ದೋಹನಕ್ಕಾಗಿ
(ದೋಹಸೇ) ವೇದಮಾನಿನಿಯರು ಹಡೆದರು (ಜನಯಂತ ಯೋಷಣಃ) ಇವರೇ,
ನಡಿಲ್ಲಾಯರ ಪತ್ನಿಯಲ್ಲಿ
ಸನ್ನಿಹಿತರಾಗಿ ಮಧ್ವನನ್ನು ಹಡೆದರು, ಜಗತ್ತಿಗಿತ್ತರು.
ನಾರಾಯಣಪಂಡಿತರೇ ಮುಂದೆ ಹೇಳುತ್ತಾರೆ, ಶ್ರೀ-ಶ್ರೀಧರ-ಪ್ರತತಿ-ಶಾರ-ಶರೀರ-ಯಷ್ಟಿ ಎಂದು.
ಮೂರನೇ ಮಂತ್ರ -
ನಿರ್ಯದೀಂ ಬುಧ್ನಾನ್ಮಹಿಷಸ್ಯ ವರ್ಪಸ ಈಶಾನಾಸ: ಶವಸಾ ಕ್ರಂತ ಸೂರಯಃ ।
ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ ॥
ಈ ಯಾವ
ವೇದಮಾತೆಯ ಕುವರನಿಂದ, ಎಂಥವನಿಂದ? ಜ್ಞಾನವನ್ನು
ಬೋಧಿಸುವವನಿಂದ (ಬುಧ್ನಾತ್) ಸರ್ವೋತ್ಕೃಷ್ಟನಾದ, ಮಹಿತನಾದ ಭಗವಂತನ (ಮಹಿಷಸ್ಯ) ಗುಣಗಳನ್ನು (ವರ್ಪಸ:)
ಸುಲಭವಾಗಿ (ಶವಸಾ) ಶಿವನೇ ಮೊದಲಾದ ಜ್ಞಾನಿಗಳು (ಈಶಾನಾಸ: ಸೂರಯಃ) ನಿಶ್ಚಯವಾಗಿ ತಿಳಿದವರಾದರೋ
(ನಿಃಕ್ರಂತ) , ಅಂಥಾ
ಇವನು (ಯದೀಮ್) ಪೂರ್ಣಪ್ರಜ್ಞನು (ಪ್ರದಿವಃ) ಭಗವಂತನಲ್ಲಿ ಸದಾ ಗಮನವುಳ್ಳವನು, ಭಗವಂತನೆಡೆಗೆ
ಸಾಧಕರನ್ನು ಕರೆದೊಯ್ಯುವವನು (ಮಾತರಿಶ್ವಾ) ಮಧ್ವನಾಗಿ ಭುವಿಯಲ್ಲಿ ಬಂದು, ಎಲ್ಲಾ
ಸಜ್ಜನರ ಹೃದಯಗುಹೆಯಲ್ಲಿ ಇರುವ ಸರ್ವೋತ್ತಮನನ್ನು (ಆಧವೇ) ಕಡೆದು ಒಳಗೇ ದರ್ಶನ ಮಾಡಿಸುತ್ತಾನೆ.
(ಗುಹಾ ಸಂತಂ ಮಥಾಯತಿ) ಅಥವಾ ವೇದಗಳೆಂಬ ಹಾಲ್ಗಡಲನ್ನು ವ್ಯಾಖ್ಯಾನವೆಂಬ ಕಡೆಗೊಲಿನಿಂದ ಮಥಿಸಿ, ಭಗವಂತನ
ಸರ್ವೋತ್ತಮತ್ವಜ್ಞಾನವೆಂಬ ಅಮೃತವನ್ನು ಜಗತ್ತಿಗೆ ಉಣಿಸುತ್ತನೆ.