ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Saturday, January 26, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೧)

ಮಧ್ವ-ಪ್ರಸಂಗ -ಪರಮೋತ್ಸವ-ಲಂಪಟೋsಸೌ ಎಂದು ತನ್ನನ್ನು ತಾನೇ, ಮಧ್ವರ ಚರಿತೆಗಳ ಹಾಡುವ ಹುಚ್ಚು ನನಗೆ, ಎಂದು ನಾರಾಯಣರು ಹೇಳಿಕೊಳ್ಳುತ್ತಾರೆ. ಹುಚ್ಚು ಹೃದಯದಲ್ಲಿ ಅರಳಿದಾಗ, ಅದು ಭಕ್ತಿಯ ಮಹಾರೂಪವನ್ನು ತಾಳಿದಾಗ, ತನ್ನ ತಾನೇ ಮಧ್ವವಿಜಯವು ಮೂಡಿಬರುವುದು.

ತಾಂ ಮಂತ್ರ-ವರ್ಣೈರನುವರ್ಣನೀಯಾಂ ಶರ್ವೇಂದ್ರ-ಪೂರ್ವೈರಪಿ ವಕ್ತುಕಾಮೇ
ಸಂಕ್ಷಿಪ್ನು-ವಾಕ್ಯೇ ಮಯಿ ಮಂದ-ಬುದ್ಧೌ ಸಂತೋ ಗುಣಾಢ್ಯಾ ಕರುಣಾಂ ಕ್ರಿಯಾಸುಃ ೧.೦೬

ಹಿಂದೆ ವಾಯುದೇವನ ಪ್ರಥಮಾವತಾರವಾದ ಹನುಮಂತನ ಚರಿತೆಯನ್ನು ಬಗೆಬಗೆಯಾಗಿ ಜಗತ್ತಿಗಿತ್ತವರು ವಾಲ್ಮೀಕಿಮಹರ್ಷಿ. ಭೀಮನ ಗಾಥೆಯನ್ನು ಹಾಡಿದವರು ಸಾಕ್ಷಾತ್ ವ್ಯಾಸನೇ!
ಇನ್ನು ವೇದಗಳೇ ಜಗದ್ಗುರುವಿನ ಹಿರಿಮೆಯನ್ನು ಸಾರುತ್ತಿವೆ! ಶಿವ, ಇಂದ್ರರೆ ಮೊದಲಾದ ಸಗ್ಗಿಗಳು ಅಪೌರುಷೇಯದ ಮಾತುಗಳಿಂದ ಆನಂದತೀರ್ಥರ ಲೀಲೆಗಳನ್ನು ಕೊಂಡಾಡುತಿದ್ದಾರೆ! (ತಾಂ ಮಂತ್ರವರ್ಣೈಃ ಅನುವರ್ಣನೀಯಾಂ, ಶರ್ವೇಂದ್ರಪೂರ್ವೈಃ ಅಪಿ).
ಈ ಮೂರನೇ ಅವತಾರದ ಅಧಿಕೃತ ದಾಖಲೆಯನ್ನು ನನ್ನಿಂದ ಮಾಡಿಸುವ ಸಂಕಲ್ಪ ಆ ದೊಡ್ಡವಸ್ತುವಿಗಿದೆ. ವ್ಯಾಸ ವಾಲ್ಮೀಕಿಗಳಾರು! ಯಾಥರದವ ನಾನು! ಅವರದ್ದಾದರೋ ವೇದವೇ ಮಾತು! ನನ್ನದು ಚುಟುಕಾದ, ತೊದಲು ನುಡಿಗಳು (ಸಂಕ್ಷಿಪ್ನು-ವಾಕ್ಯೇ), ಅವರೋ ಸರ್ವಜ್ಞರು! ನನ್ನ ಬುದ್ಧಿಯೇ ಪೀಚು(ಮಂದ-ಬುದ್ಧೌ), ಆದರೂ ನನ್ನ ಗುರುವಿನ ಲೀಲೆಯನ್ನು ಬಣ್ಣಿಸುವ ತವಕ ನನಗೆ(ವಕ್ತುಕಾಮೇ). ಇದು ದೇವರ ಆಣತಿ! ಗುರುಗಳೇ ಪ್ರೇರಿಸಿದ್ದು! ನನ್ನ ತಂದೆಯ ಹಿರಿಯಾಸೆ! ( ಮಧ್ವವಿಜಯಂ  ವ್ಯಧಾತ್  ಗುರುಗಿರಾ...)
ದಯಮಾಡಿ, ದೋಷಗಳನ್ನು ಮಾತ್ರ ನೋಡದೆ, ಪ್ರೋತ್ಸಾಹಿಸುವ, ಗುಣಗಳನ್ನು ಕೊಂಡಾಡುವ ಮನಸ್ಸಂಪತ್ತುಳ್ಳ ಸಜ್ಜನರು ನನ್ನಲ್ಲಿ (ಮಯಿ) ಕರುಣೆದೋರಲಿ ಎಂದು ಮಾತ್ರ ಬಿನ್ನವಿಸುವೆ! (ಸಂತೋ ಗುಣಾಢ್ಯಾ ಕರುಣಾಂ ಕ್ರಿಯಾಸುಃ)
ಈ ಪದ್ಯದ ಛಂದಸ್ಸು ‘ಇಂದ್ರವಜ್ರ’. ಸರ್ವದೇವೇಂದ್ರನಾದ ಮುಖ್ಯಪ್ರಾಣನಲ್ಲಿ ಸಾಗಿ ರಮಿಸುವ  ಆಶಯವನ್ನು ಎಲ್ಲಾ ಸಜ್ಜನರಲ್ಲಿ ಮೂಡಿಸುವ ನಡೆಯ ಮೋಡಿ.

No comments:

Post a Comment