ಯಾಭ್ಯಾಂ ಶುಶ್ರಷುರಾಸೀ: ಎಂಬ ತಂದೆಯ ಪ್ರಸಿದ್ಧವಾದ
ವಾಯುಸ್ತುತಿಯ ಸೊಬಗನ್ನು ಹೊತ್ತು ಬಂತು ಮಗ ನಾರಾಯಣನ ಮುಂದಿನ ಪದ್ಯ,
ಅನಾಕುಲಂ ಗೋಕುಲಮುಲ್ಲಲಾಸ
ಯತ್ಪಾಲಿತಂ ನಿತ್ಯಮನಾವಿಲಾತ್ಮ ।
ಯತ್ಪಾಲಿತಂ ನಿತ್ಯಮನಾವಿಲಾತ್ಮ ।
ತಸ್ಮೈ ನಮೋ ನೀರದ - ನೀಲ- ಭಾಸೇ
ಕೃಷ್ಣಾಯ ಕೃಷ್ಣಾ - ರಮಣ - ಪ್ರಿಯಾಯ ॥೦೧.೦೨॥
ಕೃಷ್ಣಾಯ ಕೃಷ್ಣಾ - ರಮಣ - ಪ್ರಿಯಾಯ ॥೦೧.೦೨॥
ಮಂಗಳಪದ್ಯವೊಂದು ಹಿಂದೆ ಆಯಿತಲ್ಲವೆ, ಮತ್ತೆ ಏಕೆ ಕೃಷ್ಣನ ಸ್ತುತಿ? ಹಿಂದೆ ಆದದ್ದು ಸರ್ವಾವತಾರಬೀಜನಾದ
ನಾರಾಯಣನ ಸ್ತುತಿ. ಮಧ್ವವೆಂಬ ಈ ರೂಪ ವಿಶೇಷವಾಗಿ ಜ್ಞಾನಕಾರ್ಯಕ್ಕಾಗಿ ಆದದ್ದು. ಜಗದ್ಗುರುಗಳ
ಗುರುವಾದ ವ್ಯಾಸನೆ ನನ್ನ ನಿಜಗುರುವೆಂದು ಜಗತ್ತಿಗೆ ಸಾರಿದವರು ಮಧ್ವರೊಬ್ಬರೆ.
ತಮೇವ ಶಾಸ್ತ್ರಪ್ರಭವಂ ಪ್ರಣಮ್ಯ
ಜಗದ್ಗುರೂಣಾಂ ಗುರುಮ್ ಅಂಜಸೈವ । ವಿಶೇಷತೋ ಮೇ... ಎಂದು.
ವ್ಯಾಸನ ವಿಶೇಷ ಉಪಾಸನೆಯ ಫಲವೇ
ಮಧ್ವರಿತ್ತ ಅಧ್ಯಾತ್ಮ ಸಂಪತ್ತು. ಹನುಮನಾಗಿ ರಾಮನ ಸೇವೆಗೈದಂತೆ, ಭೀಮನಾಗಿ ಕೃಷ್ಣನ ಪೂಜಿಸಿದಂತೆ, ಮಧ್ವನಾಗಿ ವ್ಯಾಸನ ನುಡಿಗಳ
ವ್ಯಾಖ್ಯಾನವೆಂಬೋ ಭಗವತ್ಕಾರ್ಯವನ್ನು ಸಾಧಿಸಿದ ತನ್ನ ಆಚಾರ್ಯವರ್ಯರ ಬಿಂಬನಾದ
ಶಬ್ದಬ್ರಹ್ಮನಾದ ಅಕಾರವಾಚ್ಯನಾದ ವ್ಯಾಸನನ್ನು
ಅಕಾರದಿಂದಲೇ ತುತಿಸುತ್ತಾರೆ ನಾರಾಯಣರು, ಅನಾಕುಲಮ್ ಎಂಬ ಪದ್ಯದಿಂದ.
ಯತ್ಪಾಲಿತಂ, ಯಾರ ರಕ್ಷಣೆಯಲ್ಲಿ , ನಿತ್ಯಂ,, ನಾಶವಿಲ್ಲದ,, ಅನಾದಿಯಾದ, ಅನಾಕುಲಂ,, ಲುಪ್ತವಾಗುವ, ತಿರೋಹಿತವಾಗುವ, ಅಪವ್ಯಾಖ್ಯಾನಗಳಿಗೆ ಗುರಿಯಾಗುವ
ಭಯವನ್ನು ಕಳೆದುಕೊಂಡ,, ಅನಾವಿಲಾತ್ಮ,, ಅಪಪಾಠಗಳೆಂಬ, ಸ್ವರವರ್ಣವ್ಯತ್ಯಾಸವೆಂಬ
ಕಾಲುಷ್ಯಕ್ಕೆ ಒಳಗಾಗದ,, ಗೋಕುಲಂ,, ವೇದಸಮೂಹವು,, ಉಲ್ಲಲಾಸ, ಸಜ್ಜನರ ನಾಲಿಗೆ ಎದೆಯಲ್ಲಿ
ನಲಿದಾಡಿತೋ, ಅಂಥಾ ಕೃಷ್ಣಾ - ರಮಣ - ಪ್ರಿಯಾಯ,,
ಕೃಷ್ಣೆಯ ನಿಜನಲ್ಲನಾದ ಭೀಮನ
ಪ್ರಿಯನಿಗೆ, ನೀರದ - ನೀಲ - ಭಾಸೇ,, ನೀರ್ದುಂಬಿದ ನೀಲಮೇಘದಂತಾ
ಮೈಮಾಟದವನಿಗೆ,, ಕೃಷ್ಣಾಯ,, ವಸಿಷ್ಠನ ವಂಶವನ್ನು ಬೆಳಗಿದ
ವ್ಯಾಸನೆಂಬೋ ದೈವಕ್ಕೆ ನಮಃ.
ನಮಃ ಶಬ್ದದ ಅರ್ಥವನ್ನು ಹಿಂದೆಯೇ
ನೋಡಿದೆವು. ಸರ್ವಸಮರ್ಪಣೆಯೆ ನಮಶ್ಶಬ್ದದ ಅರ್ಥ. ಜಗದ್ಗುರುವಿನ ಗುರುವಾದ ವ್ಯಾಸನಲ್ಲಿ
ಸರ್ವಸಮರ್ಪಣೆ. ನನ್ನ ಉದ್ಧಾರದ ಭಾರಹೊತ್ತ ಮಧ್ವನ ಗುರುವಲ್ಲಿ ನನ್ನನ್ನೇ ಅರ್ಪಿಸಿಕೊಳ್ಳುವ ಬಗೆ.
ಉಲ್ಲಲಾಸ ಎಂಬ ಪದಕ್ಕೆ, ಸಜ್ಜನರ ನಾಲಿಗೆ ಎದೆಯಲ್ಲಿ
ನಲಿದಾಡಿದ ವೇದಸಮೂಹವೆಂಬ ಅರ್ಥವನ್ನು ಆವಿಷ್ಕರಿಸಿದೆವು. ಈ ಭಾವವನ್ನು ತಂದೆ
ತ್ರಿವಿಕ್ರಮಪಂಡಿತರು ತತ್ವಪ್ರದೀಪದಲ್ಲಿ ತೋರಿದ್ದಾರೆ - ಜಿಹ್ವಾಸೂಲ್ಲಸಿತಾ ಸತಾಂ ಪ್ರತಿಪದಂ
ತತ್ವಪ್ರತಿದ್ಯೋತಿಕಾ ನೃತ್ಯಂತೀ ಪರಮೇರಿತೈವ ಪರಮಾ ವಾಗೀಶ್ವರೀ ಶ್ರೀಸ್ಸ್ವಯಮ್ । ಯಸ್ಯಾಸ್ಯಾದುದಿತಾಖಿಲಾಗಮವಪುಃ... ಎಂದು!
ಹೀಗೆ ಒಂದೊಂದು ಪದದ ಒಳಗಿನ
ಭಾವವನ್ನು ನಾರಾಯಣರ ಮಾತಿನ ಅನುಗ್ರಹದಿಂದ ಹೆಕ್ಕಿ ಸವಿಯುವ.
ಈ
ಪದ್ಯಕ್ಕೆ ಇನ್ನೊಂದು ಬಗೆಯ ಅರ್ಥವಿದೆ. ಅದನ್ನು ಮುಂದೆ ನೋಡುವ.
No comments:
Post a Comment