ಸರ್ಗ-ಒಂದು
ಓಂ ॥
ಅವತಾರಿಕಾ।
ಪ್ರಾಣಮುಖ್ಯರಾದ ಶ್ರೀಮದಾನಂದತೀರ್ಥ
ಭಗವತ್ಪಾದಾಚಾರ್ಯರ ಅಂತೇವಾಸಿಯಾದ ಕವಿಕುಲತಿಲಕ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಸುಪುತ್ರ, ಪೂರ್ಣಪ್ರಜ್ಞಾತ್ಮನ ದರ್ಶನ ಪಡೆದ
ಮಹಾತ್ಮ, ಶ್ರೀಮನ್ನಾರಾಯಣಪಂಡಿತನೆಂಬೋ ಋಷಿಯು, ಜಗದ್ಗುರುವಿನ ವಿಜಯಗಾಥೆಯನ್ನು
ಶಬ್ದಗಳಲ್ಲಿ ಪೋಣಿಸಬಯಸಿ, ವಿವಿಧ ಛಂದಸ್ಸುಗಳೆಂಬ ಕುಸುಮಗಳಲ್ಲಿ ಹೆಣೆಯೇ ಆದಿಯಲ್ಲಿ
ಮಧ್ವಾಂತರ್ಯಾಮಿಯಾದ ಸರ್ವಕಾರಣನಾದ ನಾರಾಯಣನನ್ನು ಭಕ್ತಿಯಿಂದ ತುತಿಸುತ್ತಾರೆ-ಕಾಂತಾಯ ಎಂಬ
ಪದ್ಯದಲ್ಲಿ.
ಕಾಂತಾಯ ಕಲ್ಯಾಣ-ಗುಣೈಕ-ಧಾಮ್ನೇ
ನವ-ದ್ಯುನಾಥ-ಪ್ರತಿಮ-ಪ್ರಭಾಯ ।
ನವ-ದ್ಯುನಾಥ-ಪ್ರತಿಮ-ಪ್ರಭಾಯ ।
ನಾರಾಯಣಾಖಿಲ -ಕಾರಣಾಯ
ಶ್ರೀ -ಪ್ರಾಣ -ನಾಥಾಯ ನಮಸ್ಕರೋಮಿ ॥೦೧.೦೧ ॥
ಶ್ರೀ -ಪ್ರಾಣ -ನಾಥಾಯ ನಮಸ್ಕರೋಮಿ ॥೦೧.೦೧ ॥
ಕಾಂತಿ ಎಂದರೆ ಇಚ್ಛೆ. ಕಾಂತನು ಬಹಳ
ಇಷ್ಟವಾದವನು. ಕ ಎಂದರೆ ಆನಂದ. ಕಾಂತನು ಆನಂದಪೂರ್ಣನು. ಕ ಎಂದರೆ ಸಂಪತ್ತು.
'ಕಖೌ ಗಘೌ ಚ ಸಂಪತ್ತೌ' ಸರ್ವೈಶ್ವರ್ಯಪೂರ್ಣನು. ಕ ಎಂದರೆ
ಬ್ರಹ್ಮ. ಅವನ ಅಂತರ್ಯಾಮಿಯು. ಕ ಎಂದರೆ ಜೀವ. ಸರ್ವಾಂತರ್ಯಾಮಿಯಾದ್ದರಿಂದ ಕಾಂತ.
ಕಲ್ಯಾಣ ಗುಣೈಕ ಧಾಮ್ನೇ -ಶೋಭನವಾದ
ಎಲ್ಲಾ ಸದ್ಗುಣಗಳ ಖನಿ. ಭಕ್ತರು ಮತ್ತೆ ಮತ್ತೆ ಕೊಂಡಾಡುವ ಅನಂತಗುಣಗಳ ಸಾಂದ್ರ. ಸಮಸ್ತಗುಣಪೂರ್ಣನಾದ್ದರಿಂದಲೇ ಸರ್ವೋತ್ತಮ.
ನಮಗೆಲ್ಲಾ ಇಷ್ಟವಾದ, ಗುಣಪೂರ್ಣವಾದ ಆ ವಸ್ತು ಹೇಗಿದೆ? ಹುಟ್ಟಿಬರುವ ಸೂರ್ಯಪ್ರಕಾಶವನ್ನು
ಹೋಲುವಂತಿದೆ.
ಹುಟ್ಟಿಬರುವ ಸೂರ್ಯಪ್ರಕಾಶವೂ ಇವನದೇ
ನಿಜವಾದ ಹಸಾದ. ಅವನ ಒಳಗಿದ್ದು ಬೆಳಗುವ ಗಾಯತ್ರಿಯ ಪ್ರಸಾದ. ನನಗಿಷ್ಟವಾದ, ಗುಣಪೂರ್ಣನಾದ, ನನ್ನ ಅಂತರ್ಯಾಮಿಯೇ ಸೂರ್ಯನ ಒಳಗಿದ್ದು
ಬೆಳಗುವವ- 'ನವದ್ಯುನಾಥ ಪ್ರತಿಮಪ್ರಭಾಯ '
ಯಾರವನು? ನಾರಾಯಣ.
ಅಖಿಲಕಾರಣನಾದ ನಾರಾಯಣ. ನನಗೂ, ವಿಶ್ವಕ್ಕೂ, ಶ್ರೀತತ್ವಕ್ಕೂ ಕಾರಣನಾದ ನಾರಾಯಣ.
ಎಲ್ಲವನ್ನೂ ಮಾಡುವನಾದ್ದರಿಂದ ಎಲ್ಲದಕ್ಕೂ ಕಾರಣ. "ಸರ್ವಕರ್ತಾ " ಆದ್ದರಿಂದ
ನಾರಾಯಣ. ಜಗತ್ತಿನ ತಾಯಿಯಾದ 'ಶ್ರೀ ' ಜಗತ್ತಿನ ಗುರುವಾದ 'ಪ್ರಾಣ ' ಇವರಿಬ್ಬರಿಗೂ ನಾಥ
-"ಶ್ರೀಪ್ರಾಣನಾಥಾಯ".ಇವರಿಬ್ಬರಿಂದ ಸಮಸ್ತ ಚೇತನಾಚೇತನದ ಮೂಲಕಾರಣನಾದ ನಾರಾಯಣ, ನಿನಗೆ ನಮಸ್ಕಾರವನ್ನು ಮಾಡುವೆ, ನಮಸ್ಕರೋಮಿ.
ಈ
ಶ್ಲೋಕದ ಇನ್ನೂ ಹಲವು ಮುಖಗಳನ್ನು ತೇಯ್ದು
ಹೆಕ್ಕಿ ನೋಡುವ.
No comments:
Post a Comment