ಶಬ್ದಗಳ
ಚಮತ್ಕಾರದಿಂದ ಸೊಗಸಾದ, ಹೃದಯಂಗಮವಾದ ಅರ್ಥವನ್ನು ಸಹೃದಯರಿಗೆ ಉಣಬಡಿಸುವ ಮೋಡಿಯೇ ಕಾವ್ಯ. ಸ್ವಭಾವದಿಂದ ನಾರಾಯಣರದ್ದು ಕವಿಹೃದಯ. ಮನೆತನವೇ ಕವಿತ್ವದ ಹಂದರ. ಮನೆಯಲ್ಲಿರುವವರೆಲ್ಲಾ ಕವಿಗಳೇ. ಇಂಥಾ ಪರಿಸರದಲ್ಲಿದ್ದು ಬೆಳೆದ
ನಾರಾಯಣ ಪಂಡಿತರು ಅದರ ಪೂರ್ಣವಿಕಾಸವನ್ನು ಮಧ್ವವಿಜಯದಲ್ಲಿ
ಸೂಸಿದ್ದಾರೆ. ಅವರ ಮಾತಿನ ಧಾಟಿಯೇ
ಅನುಪ್ರಾಸಾಲಂಕಾರ. ಹೆಜ್ಜೆ ಹೆಜ್ಜೆಗೂ ತಮ್ಮ ಕಾವ್ಯದಲ್ಲಿ ಒಂದಲ್ಲ
ಒಂದು ಕಾವ್ಯ ಚಮತ್ಕಾರನ್ನು ತೋರಿದ್ದಾರೆ. ಯಮಕ, ಏಕಾಕ್ಷರಗಳೇ ಮೊದಲಾದ
ಶಬ್ದಾಲಂಕಾರಗಳಲ್ಲದೆ ಅದ್ಭುತವಾದ ಬಂಧಗಳನ್ನು ಹೆಣೆದಿದ್ದಾರೆ. ಸ್ವಭಾವೋಕ್ತಿ, ಪರಿಕರ, ಉಪಮಾ, ಶ್ಲೇಷ, ಅರ್ಥಾಂತರನ್ಯಾಸ ರೂಪಕವೇ ಮೊದಲಾದ ಮೂವತ್ತಕ್ಕೂ ಮೀರಿ ಅರ್ಥಾಲಂಕಾರಗಳಿಂದ ತಮ್ಮ
ಕೃತಿಯನ್ನು ಸಿಂಗರಿಸಿದ್ದಾರೆ. ಭಕ್ತಿ, ಶಾಂತ, ವೀರ, ಅದ್ಭುತ, ಶೃಂಗಾರಾದಿ
ರಸಗಳನ್ನು ಸಹೃದಯನ ಅಂತರಂಗದಿ ಚಿಮ್ಮಿಸಿ ಅದರ ಒರೆತದಿಂದ ಮನಸ್ಸನ್ನು
ತೋಯಿಸಿದ್ದಾರೆ. ಕಾವ್ಯದ ಪ್ರತಿಅಂಶವನ್ನೂ ವಿಶೇಷವಾದ ಆಧ್ಯಾತ್ಮಿಕ ಅರ್ಥದ ಆವಿಷ್ಕಾರಕ್ಕೆ ಬಳಸಿಕೊಂಡದ್ದು ಇವರ ಆಧ್ಯಾತ್ಮಿಕ ಹೃದಯಕ್ಕೆ ಸಾಕ್ಷಿ.
ಪ್ರೌಢವಾದ
ಭಾಷೆ, ಬಿಗಿಯಾದ ಛಂದಸ್ಸಿನ ನಡೆ ಇವು ನಾರಾಯಣ
ಪಂಡಿತರ ವೈಶಿಷ್ಟ್ಯ. ಮಧ್ವವಿಜಯಭಾವಸಂಗ್ರಹ ಮಾಡುತ್ತಾ ಕಾವ್ಯರಸಾಸ್ವಾದನೆಯನ್ನೂ ಮಾಡುವ. ಇದು ಮಧ್ವವಿಜಯದ ಎರಡನೇ
ಮುಖ.
No comments:
Post a Comment