॥ ಹರಿಃ ಓಂ ॥
॥ ಶ್ರೀಗುರುಭ್ಯೋ ನಮಃ ॥
ಶ್ರೀಮಧ್ವವಿಜಯಭಾವಸಂಗ್ರಹ
ಭಾರತೀಯ ಸಂಸ್ಕೃತಸಾಹಿತ್ಯದ ಇತಿಹಾಸದಲ್ಲಿ ಒಂದು ಅಪೂರ್ವವಾದ ಕ್ರಾಂತಿಯನ್ನು ಮಾಡಿದವರು
ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಪುತ್ರರಾದ ನಾರಾಯಣಪಂಡಿತಾಚಾರ್ಯರು. ಮಹಾಭಾರತ
-ರಾಮಾಯಣ -ಭಾಗವತವೇ ಮೊದಲಾದ ಪ್ರಾಚೀನಗ್ರಂಥಗಳನ್ನು ಆಧರಿಸಿ ಅಂದಿನ ಕವಿಗಳು ತಮ್ಮ
ಕಾವ್ಯಪ್ರಯೋಗಗಳನ್ನು ನಡೆಸುತ್ತಿರುವಾಗಲೇ ತಮ್ಮ ಆತ್ಮೋದ್ಧಾರಗೈದ ಗುರುಗಳ
ಯಶೋಗಾಥೆಯನ್ನು ಚಿತ್ರಿಸಲು ನಿಂತವರು ನಾರಾಯಾಣಪಂಡಿತರು. ಒಬ್ಬ ಮಹಾಕವಿ ತನ್ನ ಸಮಕಾಲೀನ
ವ್ಯಕ್ತಿಯ ಜೀವನಕಥೆಯನ್ನು ಕಾವ್ಯವಾಗಿ ಹಾಡಿದ್ದು ಅದೇ ಮೊದಲು.
ಅವರ ಜಾಡನ್ನೇ ಹಿಡಿದು ಮುಂದೆ ಸಾವಿರಾರು ಮಹಾಪುರುಷರ ಜೀವನಗಾಥೆಯನ್ನು ಕಾವ್ಯಾತ್ಮಕವಾಗಿ ರಚಿಸುವುದಕ್ಕೆ ಕವಿಗಳು ಮುಂದಾದರು. ಇದು ಬಯಾಗ್ರಫಿ ಎಂಬ ಒಂದು ಹೊಸ ಸಾಹಿತ್ಯಪ್ರಕಾರವನ್ನೇ ಹುಟ್ಟು ಹಾಕಿತು.
ಇಂದಿನ ಬಯಾಗ್ರಫಿಗಳು ವಿವರಣಾತ್ಮಕ ಹಾಗೂ ಶುಷ್ಕವಾದ ಭಾಷೆಯಿಂದ ಕೇವಲ ಒಂದು ಪಂಗಡದ ಜನರನ್ನು ಆಕರ್ಷಿಸುತ್ತಿದ್ದರೆ, ನಾರಾಯಣಪಂಡಿತರು ರಚಿಸಿದ ತನ್ನ ಗುರುಗಳ ಬಯಾಗ್ರಫಿ ಶಾಸ್ತ್ರಾತ್ಮಕವಾದ ಕಾವ್ಯವಾಯಿತು, ಕಾವ್ಯಾತ್ಮಕವಾದ ಶಾಸ್ತ್ರವಾಯಿತು. ಸಂಸ್ಕೃತತರುಣಿ ಟೊಂಕಕಟ್ಟಿ ನಲಿಯಲು ಒಂದು ಅದ್ಭುತರಂಗಮಂಚವಾಯಿತು.
ಎಲ್ಲಾ ಸರಿ, ನಾರಾಯಣಪಂಡಿತರಂಥ ಕವಿಶ್ರೇಷ್ಠರು ರಚಿಸಿದ ಆ ಯಶೋಗಾಥೆಯ ನಾಯಕನಾರು? ಅವರ ಸಂಬಂಧ ಎಂಥದ್ದು? ಅದರ ಪೂರ್ವತಯಾರಿ ಹೇಗಿತ್ತು? ಮುಂದೆ ನೋಡೋಣ.
ಅವರ ಜಾಡನ್ನೇ ಹಿಡಿದು ಮುಂದೆ ಸಾವಿರಾರು ಮಹಾಪುರುಷರ ಜೀವನಗಾಥೆಯನ್ನು ಕಾವ್ಯಾತ್ಮಕವಾಗಿ ರಚಿಸುವುದಕ್ಕೆ ಕವಿಗಳು ಮುಂದಾದರು. ಇದು ಬಯಾಗ್ರಫಿ ಎಂಬ ಒಂದು ಹೊಸ ಸಾಹಿತ್ಯಪ್ರಕಾರವನ್ನೇ ಹುಟ್ಟು ಹಾಕಿತು.
ಇಂದಿನ ಬಯಾಗ್ರಫಿಗಳು ವಿವರಣಾತ್ಮಕ ಹಾಗೂ ಶುಷ್ಕವಾದ ಭಾಷೆಯಿಂದ ಕೇವಲ ಒಂದು ಪಂಗಡದ ಜನರನ್ನು ಆಕರ್ಷಿಸುತ್ತಿದ್ದರೆ, ನಾರಾಯಣಪಂಡಿತರು ರಚಿಸಿದ ತನ್ನ ಗುರುಗಳ ಬಯಾಗ್ರಫಿ ಶಾಸ್ತ್ರಾತ್ಮಕವಾದ ಕಾವ್ಯವಾಯಿತು, ಕಾವ್ಯಾತ್ಮಕವಾದ ಶಾಸ್ತ್ರವಾಯಿತು. ಸಂಸ್ಕೃತತರುಣಿ ಟೊಂಕಕಟ್ಟಿ ನಲಿಯಲು ಒಂದು ಅದ್ಭುತರಂಗಮಂಚವಾಯಿತು.
ಎಲ್ಲಾ ಸರಿ, ನಾರಾಯಣಪಂಡಿತರಂಥ ಕವಿಶ್ರೇಷ್ಠರು ರಚಿಸಿದ ಆ ಯಶೋಗಾಥೆಯ ನಾಯಕನಾರು? ಅವರ ಸಂಬಂಧ ಎಂಥದ್ದು? ಅದರ ಪೂರ್ವತಯಾರಿ ಹೇಗಿತ್ತು? ಮುಂದೆ ನೋಡೋಣ.
Plz share such good things
ReplyDeletewonderful preface....please continue
ReplyDelete