ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Saturday, December 8, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(2/6)


ತ್ರಿವಿಕ್ರಮವಿಪಶ್ಚಿತೋ ಗುಣನಿಧೇಃ ಸುಶಿಷ್ಯಾಃ ಸುತಾಃ ಸತಾಮಭಿಮಾತಾಸ್ತ್ರಯೋ ಯಸ್ತ್ರಿತೀಯೋsತ್ರ ನಾರಾಯಣಃ ॥ ಸ ಮಧ್ವವಿಜಯಂ ವ್ಯಧಾತ್..... |
   ತಮ್ಮ ಮಾತಲ್ಲೇ ಹೇಳುವಂತೆ, ನಾರಾಯಣಪಂಡಿತರು ಜ್ಞಾನಿಶ್ರೇಷ್ಠರಾದ ಗುಣಗಳ ಖನಿಯಾದ ಶ್ರೀತ್ರಿವಿಕ್ರಮಪಂಡಿತರ ಮೂವರು ಮಕ್ಕಳಲ್ಲಿ ಕೊನೆಯವರು. ತಂದೆಯಿಂದ ತಿಳಿಯಬೇಕಾದ್ದನ್ನು ತಿಳಿದವರು. ಸಜ್ಜನರಿಗೆ ಬಹಳ ಹತ್ತಿರದವರು. ಕಬೆನಾಡಿನ ಪೆಜತ್ತಾಯ ವಂಶಕ್ಕೆ ಸೇರಿದವರು. ಯಾವ ಮಹಾತ್ಮರ ಪಾದಧೂಳಿಯಿಂದ ತಮ್ಮ ತಂದೆ ನವಜೀವನವನ್ನು ಪಡೆದರೋ, ಜೀವನದಲ್ಲಿ ನವದರ್ಶನವುಂಟಾಯಿತೋ ಆ ಮಹಾಮಹಿಮರ ಜೀವನದ ಘಟನೆಗಳನ್ನು ಹೆಣೆಯಲು ಮುಂದಾದರು.
   ಯಾರವರು? ನಾರಾಯಣಪಂಡಿತರನ್ನೇ ಕೇಳಿ -ಪ್ರಾಣಾಧೀಶಃ ಪ್ರಾಣ ಉಕ್ಥೋ ಜ್ಯೇಷ್ಠ ಶ್ರೇಷ್ಠಃ ಅಖಿಲೇಶ್ವರಃ ಪಾಪ್ಮನಾ ಅವಿದ್ಧಃ ಇತ್ಯಾದಿನಾನೋಪನಿಷದೀರಿತಃ ॥ ಸ ದೇವಶ್ರೇಷ್ಠಃ ಇತ್ಯಾದಿಭಾರತಾದ್ಯೈಃ ವರ್ಣಿತಃ ಪ್ರಾಣ ಇತ್ಯೇವ ಲೋಕೈಃ ಸ ಮಹಾಮಹಿಮಾ ಹ್ಯತಃ ॥ ಯಾರನ್ನು ವೇದಗಳಲ್ಲಿ ಭಾರತಾದಿಗಳಲ್ಲಿ ಜೀವೋತ್ತಮನೆಂದು, ಮುಖ್ಯಪ್ರಾಣನೆಂದು, ಸರ್ವಜ್ಞನೆಂದು, ಮಹಾಮಹಿಮನೆಂದು ದೇವತೆಗಳು ಕೊಂಡಾಡಿದ್ದಾರೋ, ಆ ಮೂರವತಾರದ ಪ್ರಾಣನೇ ನಾರಾಯಣಪಂಡಿತರ ನಾಯಕ, ಗುರು, ಸ್ವರೂಪೋದ್ಧಾರಕ.
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ ॥   ಎಂದು ವೇದಗಳು ಸಾರಿದಂತೆ, ಈ ಮುಖ್ಯಪ್ರಾಣನು ರಾಮನ ಸೇವೆಗೆ ಹನುಮಂತನಾಗಿ, ಕೃಷ್ಣನ ಪೂಜೆಗೆ ಭೀಮಸೇನನಾಗಿ, ಈಗ ವೇದಶಾಸ್ತ್ರಗಳ ಅಂತರಂಗವನ್ನು ಕಡೆದು ಉಣಿಸಲು ಪೂರ್ಣಪ್ರಮತಿ, ಮಧ್ವ ಎಂಬ ರೂಪದಿಂದ ಹುಟ್ಟಿ ಬಂದನು.

No comments:

Post a Comment