ತ್ರಿವಿಕ್ರಮವಿಪಶ್ಚಿತೋ ಗುಣನಿಧೇಃ
ಸುಶಿಷ್ಯಾಃ ಸುತಾಃ । ಸತಾಮಭಿಮಾತಾಸ್ತ್ರಯೋ ಯಸ್ತ್ರಿತೀಯೋsತ್ರ ನಾರಾಯಣಃ ॥ ಸ ಮಧ್ವವಿಜಯಂ ವ್ಯಧಾತ್..... |
ತಮ್ಮ ಮಾತಲ್ಲೇ ಹೇಳುವಂತೆ, ನಾರಾಯಣಪಂಡಿತರು ಜ್ಞಾನಿಶ್ರೇಷ್ಠರಾದ
ಗುಣಗಳ ಖನಿಯಾದ ಶ್ರೀತ್ರಿವಿಕ್ರಮಪಂಡಿತರ ಮೂವರು ಮಕ್ಕಳಲ್ಲಿ ಕೊನೆಯವರು. ತಂದೆಯಿಂದ
ತಿಳಿಯಬೇಕಾದ್ದನ್ನು ತಿಳಿದವರು. ಸಜ್ಜನರಿಗೆ ಬಹಳ ಹತ್ತಿರದವರು. ಕಬೆನಾಡಿನ ಪೆಜತ್ತಾಯ ವಂಶಕ್ಕೆ
ಸೇರಿದವರು. ಯಾವ ಮಹಾತ್ಮರ ಪಾದಧೂಳಿಯಿಂದ ತಮ್ಮ ತಂದೆ ನವಜೀವನವನ್ನು ಪಡೆದರೋ, ಜೀವನದಲ್ಲಿ ನವದರ್ಶನವುಂಟಾಯಿತೋ ಆ ಮಹಾಮಹಿಮರ ಜೀವನದ ಘಟನೆಗಳನ್ನು ಹೆಣೆಯಲು
ಮುಂದಾದರು.
ಯಾರವರು? ನಾರಾಯಣಪಂಡಿತರನ್ನೇ ಕೇಳಿ -ಪ್ರಾಣಾಧೀಶಃ
ಪ್ರಾಣ ಉಕ್ಥೋ ಜ್ಯೇಷ್ಠ ಶ್ರೇಷ್ಠಃ ಅಖಿಲೇಶ್ವರಃ । ಪಾಪ್ಮನಾ ಅವಿದ್ಧಃ ಇತ್ಯಾದಿನಾನೋಪನಿಷದೀರಿತಃ ॥ ಸ ದೇವಶ್ರೇಷ್ಠಃ
ಇತ್ಯಾದಿಭಾರತಾದ್ಯೈಃ ವರ್ಣಿತಃ । ಪ್ರಾಣ ಇತ್ಯೇವ ಲೋಕೈಃ ಸ ಮಹಾಮಹಿಮಾ ಹ್ಯತಃ ॥ ಯಾರನ್ನು ವೇದಗಳಲ್ಲಿ
ಭಾರತಾದಿಗಳಲ್ಲಿ ಜೀವೋತ್ತಮನೆಂದು, ಮುಖ್ಯಪ್ರಾಣನೆಂದು, ಸರ್ವಜ್ಞನೆಂದು, ಮಹಾಮಹಿಮನೆಂದು ದೇವತೆಗಳು ಕೊಂಡಾಡಿದ್ದಾರೋ, ಆ ಮೂರವತಾರದ
ಪ್ರಾಣನೇ ನಾರಾಯಣಪಂಡಿತರ ನಾಯಕ, ಗುರು, ಸ್ವರೂಪೋದ್ಧಾರಕ.
ತೃತೀಯಮಸ್ಯ ವೃಷಭಸ್ಯ ದೋಹಸೇ
ದಶಪ್ರಮತಿಂ ಜನಯಂತ ಯೋಷಣಃ ॥ ಎಂದು ವೇದಗಳು
ಸಾರಿದಂತೆ, ಈ ಮುಖ್ಯಪ್ರಾಣನು
ರಾಮನ ಸೇವೆಗೆ ಹನುಮಂತನಾಗಿ, ಕೃಷ್ಣನ ಪೂಜೆಗೆ ಭೀಮಸೇನನಾಗಿ, ಈಗ ವೇದಶಾಸ್ತ್ರಗಳ ಅಂತರಂಗವನ್ನು ಕಡೆದು ಉಣಿಸಲು ಪೂರ್ಣಪ್ರಮತಿ, ಮಧ್ವ ಎಂಬ ರೂಪದಿಂದ ಹುಟ್ಟಿ ಬಂದನು.
No comments:
Post a Comment