ಅವನ ಚರಣಾರವಿಂದದ ಸೇವೆಯೇ ಇವನಿಗೆ
ಪರಮಾನಂದ.
ನಮೋನಮೋ ನಾಥ ನಮೋನಮಸ್ತೇ ನಮೋನಮೋ ರಾಮ ನಮೋನಮಸ್ತೇ ।
ಪುನಃಪುನಸ್ತೇ ಚರಣಾರವಿಂದಂ ನಮಾಮಿ ನಾಥೇತಿ ನಮನ್ ಸ ರೇಮೇ ॥೦೧.೨೫॥
"ಓ ಎನ್ನೊಡೆಯನೇ ನಿನಗೆ ನಮನಗಳು! ರಾಮಾ ನಿನಗೆ ನಮೋನಮಃ! ಮತ್ತೆ ಮತ್ತೆ
ನಿನ್ನಡಿದಾವರೆಗೆರಗುವೆ ಸ್ವಾಮೀ!", ಹೀಗೆ ಹಾಡುತ್ತ ಬಾಗುತ್ತ ರಮಿಸಿದನು
ಇವನು!
ಕಿಂ ವರ್ಣಯಾಮಃ ಪರಮಂ ಪ್ರಸಾದಂ ಸೀತಾ-ಪತೇಸ್ತತ್ರ ಹರಿ-ಪ್ರಬರ್ಹೇ ।
ಮುಞ್ಚನ್ ಮಹೀಂ ನಿತ್ಯ-ನಿಷೇವಣಾರ್ಥಂ ಸ್ವಾತ್ಮಾನಮೇವೈಷ ದದೌ ಯದಸ್ಮೈ ॥೦೧.೨೬॥
ಎಂತು ಬಣ್ಣಿಪುದು ಕಪಿವರನಾದ
ಹನುಮನಲ್ಲಿ ಸೀತಾಪತಿಯು ಮಾಡಿದ ಹಿರಿಯ ಹಸಾದವನ್ನು!
ತನ್ನವತಾರ ಕೊನೆಗೊಳಿಸಿ ಭುವಿಯನ್ನು
ತೊರೆವಾಗ, ಇವನಿಗೆ ತನ್ನನ್ನೇ ಕೊಟ್ಟು ನಡೆದನು, ಅನುಗಾಲ ಸೇವೆಗಿರಲೆಂದು.
ರಾಮ, ಇವನನ್ನು ಗಟ್ಟಿಯಾಗಿ ತಬ್ಬಿ, ಹೊರಡುವ ಮುನ್ನ ಹೀಗೆಂದ, "ನಿನ್ನ ಸರ್ವೇಂದ್ರಿಯವ್ಯಾಪಾರಗಳಿಗೆ
ಸದಾ ಗೋಚರನಾಗುವೆ ನಾನು. ಇದು ದಿಟ", ಎಂದು!
ಅಥಾsಹ ವಾಯುನಂದನಂ ಸ ರಾಘವಃ ಸಮಾಶ್ಲಿಷನ್
। ತವಾಹಮಕ್ಷಗೋಚರಃ ಸದಾ ಭವಾಮಿ ನಾನ್ಯಥಾ ॥
ಆಗಲೂ ಭಕ್ತಿಯಿಂದ ತಲೆಬಾಗಿ ಇವನು
ಬೇಡಿದ್ದು ಇಷ್ಟೇ, ವಿಧೇಹಿ ಪಾದಪಙ್ಕಜೇ ತವೇಶ ಭಕ್ತಿಮುತ್ತಮಾಮ್ ।
"ಸ್ವಾಮೀ, ನಿನ್ನ ಅಡಿದಾವರೆಗಳಲ್ಲಿ ಸಾಟಿಯಿರದ
ಭಕ್ತಿಯನ್ನು ದಯಪಾಲಿಸು".
No comments:
Post a Comment