ಸೇವಕಜನರಲ್ಲೇ ಇವನಿಗೆ ಸಮನಾದ
ಮತ್ತೊಬ್ಬ ಜೀವನಿಲ್ಲ. ಇವನಂತೆ ಆತ್ಮನಿವೇದನೆ ಮಾಡಿಕೊಂಡ ಭಕ್ತನಿಲ್ಲ. ಅದಕೆ ರಾಮ ತನ್ನನ್ನು
ತಾನು ಇವನಿಗೆ ಅರ್ಪಿಸಿಕೊಂಡ.
ಹೃದೋರು-ಸೌಹಾರ್ದ-ಭೃತಾsಧಿಮೌಲಿ ನ್ಯಸ್ತೇನ ಹಸ್ತೇನ
ದಯಾರ್ದ್ರ-ದೃಷ್ಟ್ಯಾ ।
ಸೇವಾ-ಪ್ರಸನ್ನೋsಮೃತ-ಕಲ್ಪ-ವಾಚಾ ದಿದೇಶ ರಾಮಃ
ಸಹ-ಭೋಗಮಸ್ಮೈ ॥೦೧.೨೩॥
ಮಾಡಿದ ಸೇವೆಗೊಲಿದು, ಸೊದೆತುಂಬಿದ ನಲ್ನುಡಿಗಳನಾಡಿ, ಕರುಣೆಯಿಂದ ತೊಯ್ದ ಕಂಗಳಿಂದ ನೋಡಿ, ಎದೆತುಂಬ ತುಂಬಿದ
ಪ್ರೀತಿಯಿಂದ ಇವನ ತಲೆಯ ಮೇಲೆ ಕೈಯನಿರಿಸಿ ಕೊಟ್ಟನಿವನಿಗೆ ರಾಮ, ಜೊತೆಗುಣ್ಣುವ
ಬ್ರಹ್ಮಪದವನ್ನು!
ಅಮೃತದಂಥಾ ಮಾತನ್ನಾಡಿದ ರಾಮ.
"ಮದ್ಭಕ್ತೌ ಜ್ಞಾನಪೂರ್ತೌ
ಅನುಪಧಿಕಬಲಪ್ರೋನ್ನತೌ ಸ್ಥೈರ್ಯಧೈರ್ಯಸ್ವಾಭಾವ್ಯಾಧಿಕ್ಯತೇಜ-ಸ್ಸುಮತಿಶಮದಮೇಷ್ವಸ್ಯ ತುಲ್ಯೋ ನ
ಕಶ್ಚಿತ್ । ಶೇಷೋ ರುದ್ರಸ್ಸುಪರ್ಣೋsಪ್ಯುರುಗಣಸಮಿತೌ ನೋ ಸಹಸ್ರಾಂಶತುಲ್ಯಾಃ ॥ " ಎಂಬೀತ್ಯಾದಿ ಹನುಮನ ಬಗೆಗಿನ ಪ್ರಶಂಸೆಯ ಮಾತು.
ತ್ರಿವಿಕ್ರಮಪಂಡಿತರೂ ಈ
ಪ್ರಸಂಗವನ್ನು ಬಣ್ಣಿಸಿದ್ದಾರೆ, ವಾಯುಸ್ತುತಿಯಲ್ಲಿ,
"ಸಹಭುಜಮಕರೋದ್ರಾಮನಾಮಾ
ಮುಕುಂದಃ, ದುಷ್ಪ್ರಾಪೇ ಪಾರಮೇಷ್ಠ್ಯೇ ಕರತಲಮತುಲಂ ಮೂರ್ಧ್ನಿ ವಿನ್ಯಸ್ಯ ಧನ್ಯಂ
ತನ್ವನ್ ಭೂಯಃ ಪ್ರಭೂತಪ್ರಣಯವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣಃ ॥ ", ಎಂದು.
ಛಂದಸ್ಸು ಆರ್ದ್ರಾ ಎಂಬ
ಉಪಜಾತಿಪ್ರಬೇಧ.
ದಯಾರ್ದ್ರ ರಾಮ, ಭಕ್ತ್ಯಾರ್ದ್ರ ಹನುಮ. ಇಬ್ಬರ ಸವಿ
ಸಂಬಂಧದ ನೇಮ.
No comments:
Post a Comment