ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, August 11, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೩


ಸೇವಕಜನರಲ್ಲೇ ಇವನಿಗೆ ಸಮನಾದ ಮತ್ತೊಬ್ಬ ಜೀವನಿಲ್ಲ. ಇವನಂತೆ ಆತ್ಮನಿವೇದನೆ ಮಾಡಿಕೊಂಡ ಭಕ್ತನಿಲ್ಲ. ಅದಕೆ ರಾಮ ತನ್ನನ್ನು ತಾನು ಇವನಿಗೆ ಅರ್ಪಿಸಿಕೊಂಡ.

ಹೃದೋರು-ಸೌಹಾರ್ದ-ಭೃತಾsಧಿಮೌಲಿ ನ್ಯಸ್ತೇನ ಹಸ್ತೇನ ದಯಾರ್ದ್ರ-ದೃಷ್ಟ್ಯಾ
ಸೇವಾ-ಪ್ರಸನ್ನೋsಮೃತ-ಕಲ್ಪ-ವಾಚಾ ದಿದೇಶ ರಾಮಃ ಸಹ-ಭೋಗಮಸ್ಮೈ ೦೧.೨೩

ಮಾಡಿದ ಸೇವೆಗೊಲಿದು, ಸೊದೆತುಂಬಿದ ನಲ್ನುಡಿಗಳನಾಡಿ, ಕರುಣೆಯಿಂದ ತೊಯ್ದ ಕಂಗಳಿಂದ ನೋಡಿ, ಎದೆತುಂಬ ತುಂಬಿದ ಪ್ರೀತಿಯಿಂದ ಇವನ ತಲೆಯ ಮೇಲೆ ಕೈಯನಿರಿಸಿ ಕೊಟ್ಟನಿವನಿಗೆ ರಾಮ, ಜೊತೆಗುಣ್ಣುವ ಬ್ರಹ್ಮಪದವನ್ನು!
ಅಮೃತದಂಥಾ ಮಾತನ್ನಾಡಿದ ರಾಮ.
"ಮದ್ಭಕ್ತೌ ಜ್ಞಾನಪೂರ್ತೌ ಅನುಪಧಿಕಬಲಪ್ರೋನ್ನತೌ ಸ್ಥೈರ್ಯಧೈರ್ಯಸ್ವಾಭಾವ್ಯಾಧಿಕ್ಯತೇಜ-ಸ್ಸುಮತಿಶಮದಮೇಷ್ವಸ್ಯ ತುಲ್ಯೋ ನ ಕಶ್ಚಿತ್ ಶೇಷೋ ರುದ್ರಸ್ಸುಪರ್ಣೋsಪ್ಯುರುಗಣಸಮಿತೌ  ನೋ ಸಹಸ್ರಾಂಶತುಲ್ಯಾಃ " ಎಂಬೀತ್ಯಾದಿ ಹನುಮನ ಬಗೆಗಿನ ಪ್ರಶಂಸೆಯ ಮಾತು.
ತ್ರಿವಿಕ್ರಮಪಂಡಿತರೂ ಈ ಪ್ರಸಂಗವನ್ನು ಬಣ್ಣಿಸಿದ್ದಾರೆ, ವಾಯುಸ್ತುತಿಯಲ್ಲಿ,
"ಸಹಭುಜಮಕರೋದ್ರಾಮನಾಮಾ ಮುಕುಂದಃ, ದುಷ್ಪ್ರಾಪೇ ಪಾರಮೇಷ್ಠ್ಯೇ ಕರತಲಮತುಲಂ ಮೂರ್ಧ್ನಿ ವಿನ್ಯಸ್ಯ ಧನ್ಯಂ ತನ್ವನ್ ಭೂಯಃ ಪ್ರಭೂತಪ್ರಣಯವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣಃ ", ಎಂದು.

ಛಂದಸ್ಸು ಆರ್ದ್ರಾ ಎಂಬ ಉಪಜಾತಿಪ್ರಬೇಧ.
ದಯಾರ್ದ್ರ ರಾಮ, ಭಕ್ತ್ಯಾರ್ದ್ರ ಹನುಮ. ಇಬ್ಬರ ಸವಿ ಸಂಬಂಧದ ನೇಮ.

No comments:

Post a Comment