ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, April 19, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೭


ಮುಂದೆ ಯುದ್ಧಕಾಂಡ –


ನಿಬಧ್ಯ ಸೇತುಂ ರಘುವಂಶ-ಕೇತು-ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ
ಮುಷ್ಟಿ-ಪ್ರಹಾರಂ ದಶಕಾಯ ಸೀತಾ-ಸಂತರ್ಜನಾಗ್ರ್ಯೋತ್ತರಮೇಷಕೋsದಾತ್ ॥೦೧.೧೭  

ರಘುವಂಶದ ಕೀರ್ತಿಸ್ಥಂಭ ಶ್ರೀರಾಮ (ರಘುವಂಶ-ಕೇತು). ಅವನ ಕುಡಿನೋಟಕ್ಕೆ ಬೆದರಿ ಬೆಚ್ಚಿದ ಸಮುದ್ರನ ಮಧ್ಯೆ ಬಿಗಿದನಿವನು ಸೇತುವೆಯನ್ನು! (ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ ನಿಬಧ್ಯ ಸೇತುಂ).
ಸೀತೆಯನ್ನು ಬೆದರಿಸಿದ ಸೇಡಿಗೆ ತಕ್ಕ ಉತ್ತರವಾಗಿ ಬಿಗಿದು ಕೊಟ್ಟ ಹತ್ತುತಲೆಯ ರಾವಣನಿಗೆ ತನ್ನ ಮುಷ್ಟಿಯಿಂದ!
ಸಂತರ್ಜನ ಎಂದರೆ ಬೆದರಿಸುವುದು, ಗದರಿಸುವುದು ಎಂದು ಅರ್ಥ.
ತನ್ನ ತಂದೆಯ ಭಾಷೆಯನ್ನೇ ಅನುಕರಿಸಿದಂತಿದೆ ಕವಿ. ತ್ರಿವಿಕ್ರಮ ಪಂಡಿತರೂ ಇದೇ ಮಾತನ್ನು ವಾಯುಸ್ತುತಿಯಲ್ಲಿ ಆಡಿದರು -
‘ದೃಷ್ಟ್ವಾ ದುಷ್ಟಾಧಿಪೋರಃ ಸ್ಫುಟಿತಕನಕಸದ್ವರ್ಮ ಘೃಷ್ಟಾಸ್ಥಿಕೂಟಂ ನಿಷ್ಪಿಷ್ಟಮ್’ ಎಂದು.
‘ಹನುಮನ ಗುದ್ದಿಗೆ, ಪುಟಕಿಟ್ಟ ಚಿನ್ನದ ಕವಚವನ್ನು ತೊಟ್ಟಿದ್ದ, ದುಷ್ಟರ ದೊರೆಯಾದ ರಾವಣನ ಎದೆಗೂಡಿನ ಎಲಬುಗಳು ಪುಡಿಯಾದವು!’
ರಾಮನಿಗೆ ಸಮುದ್ರವೇಕೆ ಹೆದರಿತು?
ದಕ್ಷಿಣಸಾಗರದ ತೀರಕೈತಂದ ವಾನರಸೇನೆ ಅಲ್ಲೇ ನಿಂತಿತು, ರಾಮ ಜಗತ್ತಿಗೆ ತೋರಬಯಸಿದ ಲೀಲೆಗೆ ಸಾಕ್ಷಿಯಾಗಿ. ಮುಂದೆಸಾಗುವ ಮುನ್ನ ಸಮುದ್ರನ ಅನುಮತಿಯನ್ನು ಬೇಡಿ ಅಲ್ಲೇ ತಂಗಿದರು ಎಲ್ಲಾ.
ಮೂರು ರಾತ್ರಿಗಳಾದರೂ ಸಮುದ್ರ ಅಲೆಯನ್ನು ಬಿಟ್ಟು ಏಳಲಿಲ್ಲ. ರಾಮನು ಕ್ರೋಧಗೊಂಡ ತನ್ನ ಕುಡಿನೋಟದಿಂದ ಸಮುದ್ರವನ್ನು ಶೋಷಿಸಿಬಿಡುವಂತೆ ಇರುವಾಗಲೇ ಎಲ್ಲರಿಗೂ ಕಾಣುವಂತೆ ಮಾನಿಸನ ರೂಪಹೊತ್ತು ಬಂತು ಸಾಗರ.
ಇಲ್ಲಿ ಭ್ರೂಭಂಗ-ಸಂಭ್ರಾಂತ ಎಂದು ಕವಿ ಅಂದದ್ದನ್ನೆ, ಹನುಮನು ‘ಕ್ರೋಧದೀಪ್ತನಯನಾಂತಹತಃ[1], ಎಂದು ಕಂಡು ನುಡಿದ.
ಛಂದಸ್ಸು ‘ಕೀರ್ತಿ’ ಎಂಬ ಉಪಜಾತಿಯ ಪ್ರಭೇದ.
ರಾಘವನ ಕೀರ್ತಿಯನ್ನು ಜಗತ್ತಿಗೆ ಸಾರಿದ ಸಾಗರನ ನಡೆಯು.




[1] ಮಹಾಭಾರತ ತಾತ್ಪರ್ಯ ನಿರ್ಣಯ ೮.೧೦


No comments:

Post a Comment