ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, June 5, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೧


ಸೀತಾರಾಮ, ಬಂದ ಅಯೋಧ್ಯೆಗೆ.
ಹದಿನಾಲ್ಕು ವರ್ಷಗಳ ಕಾಲ ದುಷ್ಟಶಿಕ್ಷಣ ಶಿಷ್ಟರಕ್ಷಣ ಮಾಡಿ ಬಂದ ಅಯೋಧ್ಯೆಗೆ.
ಸೇವಕತನದ ರುಚಿಯಸವಿದು ತೋರೆಯಲಾಗದೆ ಮತ್ತೂ ಸೇವಿಸಲು ದಣಿಯ ಜೊತೆಗೇ ಬಂದನಲ ತಾನೂ ಅಯೋಧ್ಯೆಗೆ ಹನುಮ.

ಶ್ಯಾಮಂ ಸ್ಮಿತಾಸ್ಯಂ ಪೃಥು-ದೀರ್ಘ-ಹಸ್ತಂ ಸರೋಜ-ನೇತ್ರಂ ಗಜ-ರಾಜ-ಯಾತ್ರಮ್
ವಪುರ್ಜಗನ್ಮಙ್ಗಲಮೇಷ ದೃಗ್ಭ್ಯಾಂ ಚಿರಾದಯೋಧ್ಯಾಧಿಪತೇಃ ಸಿಷೇವೇ ೦೧.೨೧

ಚಿರಕಾಲ ಸೇವಿಸಿದನಿವ ಕಣ್ತುಂಬ ತುಂಬಿಕೊಂಡು, ಕಡುನೀಲಿವರ್ಣನ, ನಗುಮೋರೆಯ, ಆಜಾನು ತೋಳಿನ,  ತಾವರೆಯ ಕಣ್ಣಿನ, ಸಲಗದ ದಿಟ್ಟ ನಡೆಯ, ಜಗತ್ತಿಗೇ ಮಂಗಳನಾದ ಅಯೋಧ್ಯೆಯ ದೊರೆಯ ಚೆಲುಮೈಮಾಟವನ್ನು!
ರಾಮ ಎಂಬ ಶಬ್ದವನ್ನು ಬಿಡಿಸಿ ಹೇಳಿದಂತಿದೆ ಈ ಪದ್ಯ.

ಅಸಿತ-ಶುಕ್ಲ-ಮನೋಜ್ಞ’ ಎಂಬ ಅರ್ಥಗಳಲ್ಲಿ ಕೋಶದವರು ರಾಮಶಬ್ದವನ್ನು ಪಠಿಸುತ್ತಾರೆ.

ಛಂದಸ್ಸು ಜಾಯಾ ಎಂಬ ಉಪಜಾತಿ ಪ್ರಭೇದ.
ರಾಜ್ಯಲಕ್ಷ್ಮಿಯನ್ನು ಮತ್ತೆ ತನ್ನ ಜಾಯೆಯಾಗಿ ಸ್ವೀಕರಿಸಿ ಅಭೂತಪೂರ್ವವಾಗಿ ಆಳಿದ ರಾಮನ ಕಥೆ.

No comments:

Post a Comment