ಸೀತಾರಾಮ, ಬಂದ ಅಯೋಧ್ಯೆಗೆ.
ಹದಿನಾಲ್ಕು ವರ್ಷಗಳ ಕಾಲ
ದುಷ್ಟಶಿಕ್ಷಣ ಶಿಷ್ಟರಕ್ಷಣ ಮಾಡಿ ಬಂದ ಅಯೋಧ್ಯೆಗೆ.
ಸೇವಕತನದ ರುಚಿಯಸವಿದು ತೋರೆಯಲಾಗದೆ
ಮತ್ತೂ ಸೇವಿಸಲು ದಣಿಯ ಜೊತೆಗೇ ಬಂದನಲ ತಾನೂ ಅಯೋಧ್ಯೆಗೆ ಹನುಮ.
ಶ್ಯಾಮಂ ಸ್ಮಿತಾಸ್ಯಂ ಪೃಥು-ದೀರ್ಘ-ಹಸ್ತಂ ಸರೋಜ-ನೇತ್ರಂ
ಗಜ-ರಾಜ-ಯಾತ್ರಮ್ ।
ವಪುರ್ಜಗನ್ಮಙ್ಗಲಮೇಷ ದೃಗ್ಭ್ಯಾಂ ಚಿರಾದಯೋಧ್ಯಾಧಿಪತೇಃ ಸಿಷೇವೇ ॥೦೧.೨೧॥
ಚಿರಕಾಲ ಸೇವಿಸಿದನಿವ ಕಣ್ತುಂಬ
ತುಂಬಿಕೊಂಡು, ಕಡುನೀಲಿವರ್ಣನ, ನಗುಮೋರೆಯ, ಆಜಾನು ತೋಳಿನ, ತಾವರೆಯ ಕಣ್ಣಿನ, ಸಲಗದ ದಿಟ್ಟ ನಡೆಯ, ಜಗತ್ತಿಗೇ ಮಂಗಳನಾದ ಅಯೋಧ್ಯೆಯ
ದೊರೆಯ ಚೆಲುಮೈಮಾಟವನ್ನು!
ರಾಮ ಎಂಬ ಶಬ್ದವನ್ನು ಬಿಡಿಸಿ
ಹೇಳಿದಂತಿದೆ ಈ ಪದ್ಯ.
‘ಅಸಿತ-ಶುಕ್ಲ-ಮನೋಜ್ಞ’ ಎಂಬ
ಅರ್ಥಗಳಲ್ಲಿ ಕೋಶದವರು ರಾಮಶಬ್ದವನ್ನು ಪಠಿಸುತ್ತಾರೆ.
ಛಂದಸ್ಸು ಜಾಯಾ ಎಂಬ ಉಪಜಾತಿ
ಪ್ರಭೇದ.
ರಾಜ್ಯಲಕ್ಷ್ಮಿಯನ್ನು ಮತ್ತೆ ತನ್ನ
ಜಾಯೆಯಾಗಿ ಸ್ವೀಕರಿಸಿ ಅಭೂತಪೂರ್ವವಾಗಿ ಆಳಿದ ರಾಮನ ಕಥೆ.
No comments:
Post a Comment